ಪಲಾಂಪುರ (ಹಿಮಾಚಲ ಪ್ರದೇಶ): ಹಿಮಾಲಯದಲ್ಲಿ ವಾರ್ಷಿಕ ಆಧ್ಯಾತ್ಮಿಕ ತೀರ್ಥಯಾತ್ರೆ ನಡೆಸುತ್ತಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ರಾಜಕೀಯದ ಬಗ್ಗೆ ಮಾತನಾಡಲು ಭಾನುವಾರ ನಿರಾಕರಿಸಿದ್ದಾರೆ.
ನಾನು ತೀರ್ಥಯಾತ್ರೆಯಲ್ಲಿದ್ದು, ಯಾತ್ರಾ ಸ್ಥಳಗಳ ಭೇಟಿ ಬಹಳ ಚೆನ್ನಾಗಿದೆ. ದೈವಿಕತೆ ಎಂಬುದು ಭಿನ್ನವಾಗಿದ್ದು, ತೀರ್ಥಯಾತ್ರಾ ಸ್ಥಳದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ರಜನಿ ಕಾಂತ್ ಅವರು ಕಂದಬಾರಿ ಎಂಬ ಪ್ರದೇಶದಲ್ಲಿರುವ ಮಹಾವತಾರ್ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು.