ಉತ್ತರಪ್ರದೇಶ: ತುಂಡಾಗಿದ್ದ ಅರ್ಧ ಕಾಲನ್ನೇ ರೋಗಿಯ ತಲೆ ಕೆಳಗೆ ಇಟ್ಟ ವೈದ್ಯ!

ಭೀಕರ ರಸ್ತೆ ಅಪಘಾತವೊಂದರಲ್ಲಿ ತುಂಡಾದ ಅರ್ಧ ಕಾಲನ್ನೇ ರೋಗಿಯ ತಲೆ ದಿಂಬುವಿನಂತೆ ಬಳಸಿರುವ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ...
ಉತ್ತರಪ್ರದೇಶ: ತುಂಡಾಗಿದ್ದ ಅರ್ಧ ಕಾಲನ್ನೇ ರೋಗಿಯ ತಲೆ ಕೆಳಗೆ ಇಟ್ಟ ವೈದ್ಯ!
ಉತ್ತರಪ್ರದೇಶ: ತುಂಡಾಗಿದ್ದ ಅರ್ಧ ಕಾಲನ್ನೇ ರೋಗಿಯ ತಲೆ ಕೆಳಗೆ ಇಟ್ಟ ವೈದ್ಯ!
Updated on
ಝಾನ್ಸಿ; ಭೀಕರ ರಸ್ತೆ ಅಪಘಾತವೊಂದರಲ್ಲಿ ತುಂಡಾದ ಅರ್ಧ ಕಾಲನ್ನೇ ರೋಗಿಯ ತಲೆ ದಿಂಬುವಿನಂತೆ ಬಳಸಿರುವ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. 
ಬಮೌರಿ ಗ್ರಾಮದಲ್ಲಿ ನಿನ್ನೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಧ್ಯಾನ್ ಶ್ಯಾಮ್ ಎಂಬುವವರ ಕಾಲು ತುಂಡಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಧ್ಯಾನ್ ಶ್ಯಾಮ್ ಅವರನ್ನು ಉತ್ತರಪ್ರದೇಶದ ಝಾನ್ಸಿಯ ಸರ್ಕಾರಿ ಮಹಾರಾಣಿ ಲಕ್ಷ್ಮೀಭಾಯಿ ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಲಾಗಿತ್ತು. 
ಚಿಕಿತ್ಸೆ ನೀಡಲು ಬಂದ ವೈದ್ಯರು ಅರ್ಧಕಾಲಿನ ತುಂಡನ್ನೇ ಆತನ ತಲೆಯ ಕೆಳಗೆ ದಿಂಬುವಿನಂತೆ ಇಟ್ಟಿದ್ದರು ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. 
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಹಾರಾಣಿ ಲಕ್ಷ್ಮಿ ಭಾಯಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಸಾಧ್ನ ಕೌಶಿಕ್ ಅವರು ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 
ಪ್ರಕರಣ ಸಂಬಂಧ ಇದೀಗ ನಾಲ್ಕು ಸದಸ್ಯರ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಸಮಿತಿಯಿಂದ ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com