"ಪ್ರಧಾನಿ ನರೇಂದ್ರ ಮೋದಿ ಅವರ ಅಹಂಕಾರ ಮತ್ತು ಪಕ್ಷ ಗೆದ್ದೇ ಗೆಲುತ್ತದೆ ಎಂಬ ಅತಿಯಾದ ಆತ್ಮ ವಿಶ್ವಾಸ ಪಕ್ಷದ ಇಂದಿನ ಸೋಲಿಗೆ ಕಾರಣ. ಪ್ರಧಾನಿ ಮೋದಿ ಅವರ ಮುಂಗೋಪದಿಂದಾಗಿ ಪಕ್ಷಕ್ಕೆ ಹಾನಿಯಾಗುತ್ತಿದ್ದು, ಈ ಬಗ್ಗೆ ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಅಹಂಕಾರ, ಅತಿಯಾದ ಆತ್ಮವಿಶ್ವಾಸ ಮತ್ತು ಮುಂಗೋಪ ಎಂದಿಗೂ ಒಳ್ಳೆಯದಲ್ಲ. ಇದು ಪ್ರಧಾನಿ ಮೋದಿ ಅವರಿಗಷ್ಟೇ ಅಲ್ಲ, ಪಕ್ಷಕ್ಕೂ ತೀರಲಾರದ ಹಾನಿಯನ್ನುಂಟು ಮಾಡುತ್ತದೆ. ಈ ಮೂರು ಲಕ್ಷಣಗಳು ಪ್ರಜಾಪ್ರಭುತ್ವ ರಾಜಕೀಯದ ದೊಡ್ಡ ಹಂತಕ ಗುಣಗಳಾಗಿವೆ ಎಂದು ಹೇಳಿದ್ದಾರೆ.