ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಸಮೀಪದ ಕಿತಾತುಕಡವು ಮೂಲದವರಾಗಿರುವ ದಿವ್ಯಾ ಎಂಬುವವರು ತಮ್ಮ ಪತಿ ವಿಬಿನ್ ಎಂಬುವವರನ್ನು ಕರೆದುಕೊಂಡು ಕುರಂಕಣಿ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆಂದು ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿ, ವಿಬಿನ್ ಅವರು ಸಾವನ್ನಪ್ಪಿದ್ದರು. ಕಾರ್ಯಾಚರಣಿಗಿಳಿದಿದ್ದ ರಕ್ಷಣಾ ಪಡೆಗಳು ವಿಬಿನ್ ಮೃತದೇಹವನ್ನು ಹೊರತೆಗೆದಿದ್ದು. ದಿವ್ಯಾ ಅವರಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿತ್ತು.