ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಶ್ಮೀರದಲ್ಲಿ ನಡೆಯುತ್ತಿರುವ ದೀರ್ಘ ಕಾಲದ ಉಗ್ರಗಾಮಿ ಚಟುವಟಿಕೆ ಹಾಗೂ ರಕ್ತಪಾತಕ್ಕೆ ಗಿಲಾನಿಯವರೇ ಕಾರಣ ಎಂದು ದೂರಿದ್ದಾರೆ. ಇದೇ ವೇಳೆ ಒಮರ್ ಅವರ ತಂದೆ, ಮಾಜಿ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಸಹ ಆಗಬಹುದಾದ "ಮತ್ತಷ್ಟು ವಿನಾಶದಿಂದ ಕಾಶ್ಮೀರಿ ಜನರನ್ನು ಉಳಿಸುವತ್ತ" ಗಿಲಾನಿ ಗಮನ ನೀಡಬೇಕೆಂದು ಒತ್ತಾಯಿಸಿದ್ದಾರೆ.