ನವದೆಹಲಿ: ಆಧಾರ್ ಆಧಾರಿತ ವಿದ್ಯುನ್ಮಾನ-ದೃಢೀಕರಣ(ಇ-ಕೆವೈಸಿ: ಎಲೆಕ್ಟ್ರಾನಿಕ್-ನೋ ಯುವರ್ ಕಸ್ಟಮರ್) ಮರು ಪರಿಶೀಲನೆಯ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ಬುಧವಾರ ಮುಂದೂಡಿದೆ.
ಆಧಾರ್ ಆಧಾರಿತ ಮೊಬೈಲ್ ಸಂಪರ್ಕ ಮರು ಪರಿಶೀಲನೆಯ ಕೊನೆಯ ದಿನಾಂಕವನ್ನು ಆಧಾರ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಮುಂದೂಡಿರುವುದಾಗಿ ಸಂಪರ್ಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇ-ಕೆವೈಸಿ ಮರು ಪರಿಶೀಲನೆಗೆ ಸಂಬಂಧಿಸದಂತೆ ಗ್ರಾಹಕರೊಂದಿಗೆ ನಡೆಸುವ ಯಾವುದೇ ಸಂಭಾಷಣೆ ಅಥವಾ ಎಸ್ ಎಂಎಸ್ ನಲ್ಲಿ ಕೊನೆಯ ದಿನಾಂಕ ಪ್ರಸ್ತಾಪಿಸದಂತೆ ಮೊಬೈಲ್ ಕಂಪನಿಗಳಿಗೆ ಸೂಚಿಸಲಾಗಿದೆ.