ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿಯವರು, ಬಿಜೆಪಿ ಸುಳ್ಳಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದೆ. 2012ರಲ್ಲಿ ಕಾಂಗ್ರೆಸ್ ಒಳನುಸುಳುವುದು ಹಾಗೂ ಅದನ್ನು ನಾಶಪಡಿಸುವುದಕ್ಕೆ ಕೇಂಬ್ರಿಜ್ ಅನಾಟಿಲಿಕಾ ಜೊತೆಗೆ ಹೇಗೆ ಕೈಜೋಡಿಸಲಾಯಿತು ಎಂಬುದರ ಬಗ್ಗೆ ಪತ್ರಕರ್ತರೊಬ್ಬರು ಸ್ಫೋಟಕ ಸುದ್ದಿಯನ್ನು ಬರೆದಿದ್ದರು. ಕೂಡಲೇ ಬಿಜೆಪಿ ಸಂಪುಟ ಸಚಿವರೊಂದಿಗೆ ಸುಳ್ಳು ಹೇಳಿ, ಕಾಂಗ್ರೆಸ್ ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಕೆಲಸ ಮಾಡುತ್ತಿದೆ ಎಂದು ಸುಳ್ಳಿನ ಸುದ್ದಿಗಳನ್ನು ಹರಡಿಸಿತು. ನಿಜವಾದ ಸುದ್ಧಿ ನಾಶವಾಗಿ ಹೋಯಿತು ಎಂದು ಹೇಳಿದ್ದಾರೆ.