ಪಶ್ಚಿಮ ಬಂಗಾಳದ ಪರುಲಿಯಾ, ಮುರ್ಶಿದಾಬಾದ್, ಬರ್ಧ್ಮಾನ್ ಮತ್ತು ರಾಣಿಗಂಜ್ ನಲ್ಲಿ ರಾಮ ನವಮಿ ಹಬ್ಬದ ದಿನಾಚರಣೆ ವೇಳೆ ಘರ್ಷಣೆ ಏರ್ಪಟ್ಟಿತ್ತು. ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, 12 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ರಾಣಿಗಂಜ್ ನಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ಹಲವು ಪೊಲೀಸರು ಗಾಯಗೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕೈಕಳೆದುಕೊಂಡಿದ್ದರು.