ಯುಎನ್ಆರ್ಡಬ್ಲ್ಯೂಎ ಮನವಿ ಮಾಡಿದ ಬಳಿಕ ರೋಂನಲ್ಲಿ ಮಾ.15ರಂದು ನಡೆದ ಸಮ್ಮೇಳನದಲ್ಲಿ ಭಾರತ ತನ್ನ ವಾರ್ಷಿಕ ನೆರವಿನ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ಮಾಡಿರುವುದಾಗಿ ಘೋಷಿಸಿದೆ. "ವಿಶ್ವದಾದ್ಯಂತದ ಪ್ಯಾಲೆಸ್ಟೈನ್ ನಿರಾಶ್ರಿತರಿಗೆ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಯುಎನ್ಆರ್ಡಬ್ಲ್ಯೂಎ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ" ಸಚಿವಾಲಯ ಸ್ಪಷ್ಟನೆ ನೀಡಿದೆ.