ಗುಂಟೂಯ್ರು(ಆಂಧ್ರ ಪ್ರದೇಶ): 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಾ ಎಸಗಿದ ಆರೋಪ ಹೊತ್ತಿದ್ದ ಆಟೋ ರಿಕ್ಷಾ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶ ಗುಂಟುರಿನ ದಾಚೆಪಲ್ಲಿಯಲ್ಲಿ ನಡೆದಿದೆ.
ಗುರಜಲಾಮಂಡಲದ ದೈದಾ ಗ್ರಾಮದ ಅಮರಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮೀಪ ಮರವೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಆರೋಪಿಯ ದೇಹ ಪತ್ತೆಯಾಗಿದೆ.
"ಆರೋಪಿಯ ಕುಟುಂಬ ಸದಸ್ಯರು ವ್ಯಕ್ತಿಯ ದೇಹವನ್ನು ಗುರುತಿಸಿದ್ದು ಇದೀಗ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ." ರಾಜ್ಯ ಗೃಹ ಸಚಿವ ಎನ್. ಚಿನ್ನರಾಜಪ್ಪ ಮತ್ತು ಡಿಜಿಪಿ ಎಂ. ಮಲಕೊಂಡಯ್ಯ ಮಾದ್ಯಮಕ್ಕೆ ತಿಳಿಸಿದ್ಡಾರೆ.
ಸುಬ್ಬಯ್ಯ ಬುಧವಾರದಂದು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದನು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಗುರುವಾರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಲ್ಲದೆ ರಾಚಿಪಲ್ಲಿಯಲ್ಲಿ ರಸ್ತೆತಡೆ ಸಹ ಹಮ್ಮಿಕೊಂಡಿದ್ದರು.
ಶುಕ್ರವಾರ ಸಹ ಪ್ರತಿಭಟನೆಗಳು ಮುಂದುವರಿದಿದ್ದವು. ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆಗಾಗಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಆರೋಪಿಯ ಪತ್ತೆಗಾಗಿ 17 ಪೋಲೀಸ್ ತಂಡಗಳನ್ನು ರಚಿಸಲಾಗಿತ್ತು. ಅಲ್ಲದೆ ಕೃಷ್ಣಾ ನದಿಯ ದಂಡೆಯ ಮೇಲೆ ಡ್ರೋನ್ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು.
ಆತ ಆತ್ಮಹತ್ಯೆಗೆ ಪ್ರಯತ್ನಿಸಬಹುದು ಎನ್ನುವ ಅನುಮಾನದೊಡನೆ ಪೋಲೀಸರು ನದಿದಂಡೆಯ ಮೇಲೆ ದೋಣಿಗಳೊಡನೆ ಸಜ್ಜಾಗಿದ್ದರು.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಯ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸುವಂತೆ ಆದೇಶಿಸಿದ್ದರಲ್ಲದೆ ಸಂತ್ರಸ್ತೆಯ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.