ಸಿಜೆಐ ಪದಚ್ಯುತಿ: ಮೇ.8 ಕ್ಕೆ ಕಾಂಗ್ರೆಸ್ ಸಂಸದರ ಅರ್ಜಿ ವಿಚಾರಣೆ
ಸಿಜೆಐ ಪದಚ್ಯುತಿ: ಮೇ.8 ಕ್ಕೆ ಕಾಂಗ್ರೆಸ್ ಸಂಸದರ ಅರ್ಜಿ ವಿಚಾರಣೆ

ಸಿಜೆಐ ಪದಚ್ಯುತಿ: ಮೇ.8 ಕ್ಕೆ ಕಾಂಗ್ರೆಸ್ ಸಂಸದರ ಅರ್ಜಿ ವಿಚಾರಣೆ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪದಚ್ಯುತಿಗೆ ಆಗ್ರಹಿಸಿ ಕಾಂಗ್ರೆಸ್ ಸಂಸದರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಮೇ.08 ರಂದು ನಡೆಸಲಿದೆ.
Published on
ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪದಚ್ಯುತಿಗೆ ಆಗ್ರಹಿಸಿ ಕಾಂಗ್ರೆಸ್ ಸಂಸದರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಮೇ.08 ರಂದು ನಡೆಸಲಿದೆ. 
ಸಿಜೆಐ ಪದಚ್ಯುತಿಯ ನಿಲುವಳಿ ನೋಟಿಸ್ ನ್ನು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು,  ನ್ಯಾ.ಎ.ಕೆ ಸಿಕ್ರಿ, ನ್ಯಾ.ಎಸ್ಎ ಬೋಬ್ಡೇ,  ಎನ್ ವಿ ರಮಣ, ನ್ಯಾ.ಅರುಣ್ ಮಿಶ್ರಾ, ನ್ಯಾ.ಎಕೆ ಗೋಯಲ್ ಅವರಿರುವ ಪಂಚ ಸದಸ್ಯ ಪೀಠ ಕಾಂಗ್ರೆಸ್ ಸಂಸದರ ಅರ್ಜಿಯ ವಿಚಾರಣೆ ನಡೆಸಲಿದೆ. 
ಹಿರಿಯ ನ್ಯಾಯಾಧೀಶರಾದ ನ್ಯಾ.ಜೆ ಚಲಮೇಶ್ವರ್, ರಂಜನ್ ಗೋಗೋಯ್, ಎಂಬಿ ಲೋಕುರ್, ಕುರಿಯನ್ ಜೋಸೆಫ್ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪದಚ್ಯುತಿಗೆ ಸಂಬಂಧಿಸಿದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com