ಲಾಲು ಪುತ್ರನ ಮದುವೆ ಮುಗಿಸಿ ಹಿಂತಿರುಗುವಾಗ ಅಪಘಾತ: 3 ಆರ್‌ಜೆಡಿ ನಾಯಕರ ಸಾವು

ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಮದುವೆ ಮುಗಿಸಿಕೊಂಡು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಅರಾರಿಯ(ಬಿಹಾರ): ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಮದುವೆ ಮುಗಿಸಿಕೊಂಡು ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಜೆಡಿ ನಾಯಕರು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಸಂಭವಿಸಿದೆ. 
ಬಿಹಾರದ ಅರಾರಿಯಾ ಜಿಲ್ಲೆ ಸಮೀಪ ಕೃಷ್ಣಗಂಜ್-ಪಾಟ್ನಾ ರಸ್ತೆಯಲ್ಲಿ ಆರ್ಜೆಡಿ ನಾಯಕರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು ನಂತರ ಎದುರಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡಿದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು. 
ಮೃತರನ್ನು ಆರ್‌ಜೆಡಿ ನಾಯಕ ಇಕ್ರಾಮುಲ್ ಹಾಕ್ ಬಾಗಿ, ಮಾಜಿ ಸಚಿವರೊಬ್ಬರ ಮಗ, ಕೃಷ್ಣಗಂಜ್ ಜಿಲ್ಲಾಧ್ಯಕ್ಷ ಇಂತೆಕಾಬ್ ಅಲಾಮ್, ದಿಘಾಲ್ ಗಂಜ್ ಬ್ಲಾಕ್ ಅಧ್ಯಕ್ಷ ಪಪ್ಪು ಮತ್ತು ಚಾಲಕ ಸಾಹಿಲ್ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com