ರಂಜಾನ್ ನಿಮಿತ್ತ ಕದನ ವಿರಾಮ ಇದ್ದರೂ ಪಾಕ್ ನನ್ನ ಪತಿಯನ್ನು ಕೊಂದು ಹಾಕಿದೆ: ಹುತಾತ್ಮ ಯೋಧನ ಪತ್ನಿ

ರಂಜಾನ್ ಸಂದರ್ಭದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ನಡೆದಂತೆ ಸೇನೆಗೆ ಭಾರತ ಸೂಚನೆ ನೀಡಿತ್ತು. ಕದನ ವಿರಾಮ ಇದ್ದರೂ ಪಾಕಿಸ್ತಾನ ತನ್ನ ಉದ್ಧಟತನದ ಮೂಲಕ ನನ್ನ ಪತಿಯನ್ನು ಕೊಂದು ಹಾಕಿದೆ ಎಂದು ದುಃಖತಪ್ತ ಹುತಾತ್ಮ...
ರಂಜಾನ್ ನಿಮಿತ್ತ ಕದನ ವಿರಾಮ ಇದ್ದರೂ ಪಾಕ್ ನನ್ನ ಪತಿಯನ್ನು ಕೊಂದು ಹಾಕಿದೆ: ಹುತಾತ್ಮ ಯೋಧನ ಪತ್ನಿ
ರಂಜಾನ್ ನಿಮಿತ್ತ ಕದನ ವಿರಾಮ ಇದ್ದರೂ ಪಾಕ್ ನನ್ನ ಪತಿಯನ್ನು ಕೊಂದು ಹಾಕಿದೆ: ಹುತಾತ್ಮ ಯೋಧನ ಪತ್ನಿ
ನವದೆಹಲಿ: ರಂಜಾನ್ ಸಂದರ್ಭದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ನಡೆದಂತೆ ಸೇನೆಗೆ ಭಾರತ ಸೂಚನೆ ನೀಡಿತ್ತು. ಕದನ ವಿರಾಮ ಇದ್ದರೂ ಪಾಕಿಸ್ತಾನ ತನ್ನ ಉದ್ಧಟತನದ ಮೂಲಕ ನನ್ನ ಪತಿಯನ್ನು ಕೊಂದು ಹಾಕಿದೆ ಎಂದು ದುಃಖತಪ್ತ ಹುತಾತ್ಮ ವೀರ ಯೋಧ ಸೀತಾರಾಮ್ ಉಪಾಧ್ಯಾಯ ಅವರ ಪತ್ನಿ ಹೇಳಿದ್ದಾರೆ. 
ನನ್ನ ಪತಿಯನ್ನು ಪಾಕಿಸ್ತಾನ ಹತ್ಯೆ ಮಾಡಿದೆ. ಇದೀಗ ಸರ್ಕಾರ ಪರಿಹಾರ ನೀಡುವುದರಿಂದ ಏನಾಗುತ್ತದೆ? ನನ್ನ ಪತಿಯನ್ನು ಹಿಂದಕ್ಕೆ ಕರೆತರಲು ಸಾಧ್ಯವಿಲ್ಲವಲ್ಲ ಯೋಧನ ಪತ್ನಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಆರ್'ಎಸ್ ಪುರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಈ ವೇಳೆ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಯೋಧ ಸೀತಾರಾಮ್ ಉಪಾಧ್ಯಾಯ ಅವರು ಹುತಾತ್ಮರಾಗಿದ್ದರು. 
ಕೆಲ ದಿನಗಳ ಹಿಂದಷ್ಟೇ ಅಧಿಕೃತ ಪ್ರಕಟನೆಯೊಂದನ್ನು ನೀಡಿದ್ದ ಕೇಂದ್ರ ಗೃಹ ಇಲಾಖೆ, ರಂಜಾನ್ ತಿಂಗಳಲ್ಲಿ ಭಾರತೀಯ ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸುವುದಿಲ್ಲ. ಯಾರಾದರೂ ದಾಳಿ ನಡೆಸಿದರೆ ಮರು ದಾಳಿ ನಡೆಸಲು ಸೇನೆಗೆ ಅವಕಾಶವಿದೆ ಎಂದು ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com