ಸುಪ್ರೀಂಕೋರ್ಟ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಅಶ್ವನಿ ಕುಮಾರ್ ಅವರು, ನ್ಯಾಯಾಲಯದ ಆದೇಶವನ್ನು ಸಂಭ್ರಮಿಸಬೇಕು. ಬುದ್ಧಿವಂತಿಕೆಯಿಂದ ಸುಪ್ರೀಂಕೋರ್ಟ್ ಜನರ ನಂಬಿಕೆಯನ್ನು ಗಟ್ಟಿಯಾಗುವಂತೆ ಮಾಡಿದೆ. ಅಧಿಕಾರ ಪಡೆದುಕೊಳ್ಳಲೇಬೇಕೆಂದು ಬಯಸುತ್ತಿರುವ ಪಕ್ಷಕ್ಕಿದು ಭಾರೀ ಹಿನ್ನಡೆ ಎಂದು ತಿಳಿಸಿದ್ದಾರೆ.