ಮತಾಂತರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಣಾ ಅವರು, ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಬಳಿಕ ಅವರನ್ನು ಬಲವಂತರಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಕಳೆದ 15-20 ದಿನಗಳಿಂದಲೂ ಶ್ರೀರಾಮ ನನ್ನ ಕನಸಿನಲ್ಲಿ ಬರುತ್ತಲೇ ಇದ್ದಾರೆ. ಕನಸಲ್ಲಿ ಹಿಂದು ಧರ್ಮಕ್ಕೆ ಬರುವಂತೆ ಕರೆಯುತ್ತಿದ್ದಾರೆ. ನಾವು ಈ ಹಿಂದೆ ಹಿಂದೂಗಳೇ ಆಗಿದ್ದೆವು. ಬಳಿಕ ಆಕ್ರಮಣಕಾರರು ನಮ್ಮ ಭೂಮಿಗೆ ಬಂದು ನಮ್ಮ ಪೂರ್ವಿಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರು. ಇದೀಗ ನಾನು ನನ್ನು ಮನೆಗೆ ಮರಳಿ ಬಂದಿದ್ದೇನೆಂದು ಹೇಳಿದ್ದಾರೆ.