ಈ ಪದ್ಧತಿಯನ್ನು ಇಂಡಾಲಜಿಸ್ಟ್ ನಿರಿಸುಂಗಾ ಪ್ರಸಾದ್ ಭಾದುರಿ ಖಂಡಿಸಿದ್ದು, ಕಾಳಿ ಮಂದಿರಕ್ಕೆ ಮಹಿಳೆಯರ ಪ್ರವೇಶ ಇಲ್ಲ ಎಂದರೆ ದೇವಿಯನ್ನು ಏಕೆ ಪೂಜಿಸಬೇಕು? ಎಂದು ಪ್ರಶ್ನಿಸಿದ್ದಾರೆ, ಮಹಿಳೆಯರನ್ನು ಕಾಳಿ ಮಂದಿರದಲ್ಲಿ ಬಿಡಬಾರದು ಎಂಬುದಕ್ಕೆ ಯಾವುದೇ ಧರ್ಮ ಗ್ರಂಥಗಳ ಆಧಾರವೂ ಇಲ್ಲ ಎಂದು ಬಾಧುರಿ ಹೇಳಿದ್ದಾರೆ. ಸಂಘಟನೆಯ ನಿರ್ಧಾರವನ್ನು ಹಲವು ವಿದ್ವಾಂಸರೂ ಖಂಡಿಸಿದ್ದು, ಮಹಿಳೆಯರು ಮಂದಿರವನ್ನು ಪ್ರವೇಶಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.