ಆದರೆ ಈಗ ತಾಲಿಬಾನಿ ನಾಯಕರೊಂದಿಗಿನ ಚರ್ಚೆಯ ಬಗ್ಗೆ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದ್ದು, ಅಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಡೆಯುವ ಅನಧಿಕೃತ ಸಭೆಯಲ್ಲಿ ಭಾರತ ಭಾಗಿಯಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ತಾಲೀಬಾನ್ ನಾಯಕರೂ ಸಹ ಇರಲಿದ್ದಾರೆ ಅಷ್ಟೇ ಎಂದು ಹೇಳಿದೆ. ಈ ಬಗ್ಗೆ ಸುಷ್ಮಾ ಸ್ವರಾಜ್ ಸಹ ಸ್ಪಷ್ಟನೆ ನೀಡಿದ್ದು ನಮ್ಮ ಉಪಸ್ಥಿತಿ ಅನಧಿಕೃತವಾಗಿರಲಿದೆಯಷ್ಟೇ ಎಂದು ಹೇಳಿದ್ದಾರೆ.