ಹಿಂದೂಪರ ನಾಯಕರು ಮತ್ತು ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿರುವಂತೆಯೇ ಇತ್ತ ಕೇರಳ ಪೊಲೀಸರು ತಮ್ಮ ವಶದಲ್ಲಿದ್ದ ಹಿಂದೂ ಪರ ನಾಯಕಿ ಮತ್ತು ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಅವರ ಅಯ್ಯಪ್ಪ ದರ್ಶನಕ್ಕೆ 6 ಗಂಟೆಗಳ ಕಾಲಾವಕಾಶ ನೀಡಿದ್ದು, 6 ಗಂಟೆಗಳೊಳಗೆ ಸನ್ನಿಧಾನಂ ಪ್ರವೇಶ ಮತ್ತು ಅಯ್ಯಪ್ಪ ಸ್ವಾಮಿ ದರ್ಶನ ಮಾಡುವಂತೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.