ಶಬರಿಮಲೆ: ಹಿಂದೂ ಸಂಘಟನೆ ನಾಯಕಿಗೆ ಅಯ್ಯಪ್ಪ ದರ್ಶನಕ್ಕೆ ಪೊಲೀಸರಿಂದ ಅನುವು, 6 ಗಂಟೆ ಕಾಲಾವಕಾಶ!

ಅಯ್ಯಪ್ಪ ದರ್ಶನಕ್ಕೆ ತೆರಳುವಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ತಿರುವನಂತಪುರಂ: ಅಯ್ಯಪ್ಪ ದರ್ಶನಕ್ಕೆ ತೆರಳುವಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರಿಗೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಹಿಂದೂಪರ ನಾಯಕರು ಮತ್ತು ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿರುವಂತೆಯೇ ಇತ್ತ ಕೇರಳ ಪೊಲೀಸರು ತಮ್ಮ ವಶದಲ್ಲಿದ್ದ ಹಿಂದೂ ಪರ ನಾಯಕಿ ಮತ್ತು ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಅವರ ಅಯ್ಯಪ್ಪ ದರ್ಶನಕ್ಕೆ 6 ಗಂಟೆಗಳ ಕಾಲಾವಕಾಶ ನೀಡಿದ್ದು, 6 ಗಂಟೆಗಳೊಳಗೆ ಸನ್ನಿಧಾನಂ ಪ್ರವೇಶ ಮತ್ತು ಅಯ್ಯಪ್ಪ ಸ್ವಾಮಿ ದರ್ಶನ ಮಾಡುವಂತೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.
ಇನ್ನು ಪೊಲೀಸರ ಅನುಮತಿ ಪತ್ರವನ್ನು ಬಸ್ಸಿನಲ್ಲಿ ಕುಳಿದು ಶಶಿಕಲಾ ಅವರು ಮಾಧ್ಯಮಗಳಿಗೆ ಪ್ರದರ್ಶನ ಮಾಡಿದರು. ಶಶಿಕಲಾ ಅವರೊಂದಿಗೆ ಅವರ ಮೊಮ್ಮಗ ಕೂಡ ಸನ್ನಿಧಾನಂ ನತ್ತ ತೆರಳುತ್ತಿದ್ದು, ಸನ್ನಿಧಾನಂ ನಲ್ಲಿಯೇ ತಮ್ಮ ಮೊಮ್ಮಗನಿಗೆ ಶಶಿಕಲಾ ಅವರು ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ಕಾರಣಕ್ಕಾಗಿ ಪೊಲೀಸರು ಸನ್ನಿಧಾನಂನಲ್ಲಿ ಯಾವುದೇ ರೀತಿಯ ಅಹಿತಕ ಬೆಳವಣಿಗೆ ನಡೆಯದಿರಲಿ ಎಂದು ಶಶಿಕಲಾ ಅವರಿಗೆ 6 ಗಂಟೆ ಸಮಯಾವಕಾಶ ನೀಡಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com