ಬಿಜೆಪಿ-ಕಾಂಗ್ರೆಸ್ ಸಹೋದರರಂತೆ, ಇಬ್ಬರನ್ನು ನಂಬಲು ಸಾಧ್ಯವಿಲ್ಲ: ಕೆ. ಚಂದ್ರಶೇಖರ್ ರಾವ್

ಭಾರತೀಯ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಇಬ್ಬರು ಸಹೋದರರಿದ್ದಂತೆ, ಇಬ್ಬರನ್ನು ನಂಬಲು ಸಾಧ್ಯವಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ. ...
ಕೆ.ಚಂದ್ರಶೇಖರ್  ರಾವ್
ಕೆ.ಚಂದ್ರಶೇಖರ್ ರಾವ್
Updated on
ಹೈದರಾಬಾದ್: ಭಾರತೀಯ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಇಬ್ಬರು ಸಹೋದರರಿದ್ದಂತೆ, ಇಬ್ಬರನ್ನು ನಂಬಲು ಸಾಧ್ಯವಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ. ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ದೇವರಕೊಂಡದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ, ತೆಲಂಗಾಣ ವಿಧಾನಸಭೆ ಚುನಾವಣೆ ನಂತರ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ನೀಡುವುದಾಗಿ ತಿಳಿಸಿದ್ದಾರೆ.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್  ಹಾಗೂ ಹಿರಿಯ ನಾಯಕ ಜನ ರೆಡ್ಡಿ ನಲಗೊಂಡ ಜಿಲ್ಲೆಯ ಜನರಿಗೆ ವಂಚನೆ ಮಾಡಿದ್ದಾರೆ, 85 ಬುಡಕಟ್ಟು ಪ್ರದೇಶದ ಜಾಗಗಳನ್ನು  ಗ್ರಾಮ ಪಂಚಾಯಿತಿಯಾಗಿ ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತೆಲಂಗಾಣದಲ್ಲಿ ಟಿಆರ್ ಎಸ್ ಗೆಲುವು ಖಚಿತ, ಅದನ್ನು ತಪ್ಪಿಸಲು ಯಾರಿಂಜಲೂ ಸಾಧ್ಯವಿಲ್ಲ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ. ತಮ್ಮ ಸರ್ಕಾರ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿದೆ, ಅದರ ಎಲ್ಲಾ ಕ್ರೆಡಿಟ್ ತಮ್ಮ ಸರ್ಕಾರಕ್ಕೆ ಸೇರಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com