ಪೊಲೀಸ್ ಆಯುಕ್ತ ಪಂಕಜ್ ಸಿಂಗ್, ಅವರು ಕೇಂದ್ರ ಸರಕಾರದ ಆದೇಶವನ್ನು ಅಧಿಕೃತವಾಗಿ ಹೇಳಿದರು. ನೂರಾರು ಟ್ರ್ಯಾಕ್ಟರ್ ಗಳಲ್ಲಿ ಆಗಮಿಸಿದ್ದ ರೈತರು ತಡರಾತ್ರಿ 1 ಗಂಟೆ ವೇಳೆಗೆ ದೆಹಲಿ ತಲುಪಿದರು. ಕಿಸಾನ್ ಘಾಟ್ಗೆ ಆಗಮಿಸಿದ ರೈತರ ಪ್ರತಿಭಟನಾ ರ್ಯಾಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇನ್ನು ರೈತ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿ ಅವರ 11 ಬೇಡಿಕೆಗಳ ಪೈಕಿ 7ಕ್ಕೆ ಕೇಂದ್ರ ಸಮ್ಮತಿ ನೀಡಿದೆ. ಉಳಿದ ಬೇಡಿಕೆಗಳ ಈಡೇರಿಕೆಗಾಗಿ ರೈತರು ಪಟ್ಟು ಹಿಡಿದಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುವ ಭರವಸೆ ನೀಡಿದೆ.