'ಪ್ರಧಾನಿ ಅವತಾರ ಪುರುಷನಲ್ಲ, ಮಹಿಷಾಸುರ'

ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11 ನೇ ಅವತಾರ ಎಂದಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯನ್ನು ಮಹಿಷಾಸುರನಿಗೆ
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on
ಪ್ರಧಾನಿ ನರೇಂದ್ರ ಮೋದಿ  ವಿಷ್ಣುವಿನ 11 ನೇ ಅವತಾರ ಎಂದಿದ್ದ  ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯನ್ನು ಮಹಿಷಾಸುರನಿಗೆ ಹೋಲಿಕೆ ಮಾಡಿದ್ದಾರೆ. 
ಮುಂಬೈ ನ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್,  ಪ್ರಧಾನಿ ಮೋದಿಯನ್ನು ವಿಷ್ಣುವಿನ ಅವತಾರಕ್ಕೆ ಹೋಲಿಕೆ ಮಾಡುವುದು ತಪ್ಪು ರಾಫೆಲ್ ಪ್ರಕರಣದಲ್ಲಿ ಅವ್ಯವಹಾರ ಮಾಡಿದ್ದಾರೆ ಆದ್ದರಿಂದ ಅವರನ್ನು ಅವತಾರಪುರುಷನೆನ್ನಲು ಸಾಧ್ಯವಿಲ್ಲ. 
ಇದು ನವರಾತ್ರಿ ಸಮಯ, ನಮ್ಮ ಪ್ರಧಾನಿಯ ನಡೆಯನ್ನು ಗಮನಿಸಿದರೆ ಬಿಜೆಪಿ ಒಂದು ವೇಳೆ ಕೇಳುವುದಿದ್ದರೆ ಅದು ಪ್ರಧಾನಿ ಮೋದಿ ಮಹಿಷಾಸುರನ ಅವತಾರವೇ ಎಂಬುದನ್ನು ಹೇಳಬೇಕು ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿಯ ಕುರಿತು ಕಿರುಚಿತ್ರಗಳನ್ನು ಶಾಲೆಗಳಲ್ಲಿ ಪ್ರದರ್ಶಿಸುವುದರ ಸರ್ಕಾರದ ನಡೆ ವಿರುದ್ಧವೂ ಸಂಜಯ್ ನಿರುಪಮ್ ಕಿಡಿಕಾರಿದ್ದು ಪ್ರಧಾನಿ ನರೇಂದ್ರ ಮೋದಿ ಅನಕ್ಷರಸ್ಥ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com