ರಾಮ ಮಂದಿರ ನಿರ್ಮಾಣ ದೇಶದ ಆತ್ಮಗೌರವಕ್ಕಾಗಿ ಅಗತ್ಯವಾಗಿದೆ. ಸೌಹಾರ್ದತೆ ಹಾಗೂ ಏಕತೆಗೆ ರಾಮ ಮಂದಿರ ದಾರಿ ಮಾಡಿಕೊಡಲಿದೆ ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ. ವಿಜಯದಶಮಿಯಂದು ನಾಗ್ಪುರದಲ್ಲಿ ಸಂದೇಶ ನೀಡಿರುವ ಮೋಹನ್ ಭಾಗ್ವತ್, ಮಾವೋವಾದಿಗಳು ಎಂದಿಗೂ ನಗರಗಳತ್ತಲೇ ಗಮನ ಹರಿಸುತ್ತಿದ್ದರು. ಅಂಧ ಅನುಯಾಯಿಗಳಿರುವ ದೇಶ ವಿರೋಧಿ ನಾಯಕತ್ವವನ್ನು ಸೃಷ್ಟಿಸುವುದೇ ನವ ಎಡಪಂಥದ ಉದ್ದೇಶವಾಗಿದೆ ಎಂದು ಮೋಹನ್ ಭಗವತ್ ಇದೇ ವೇಳೆ ಹೇಳಿದ್ದಾರೆ.