ನಿಜಕ್ಕೂ ಇಂದೂ ದುರಾದೃಷ್ಟಕರ ಘಟನೆ. ಹಬ್ಬವನ್ನು ಆಚರಿಸುವ ಸಲುವಾಗಿ ಜನರು ಸ್ಥಳಕ್ಕೆ ಬಂದಿದ್ದರು. ಆದರೆ, ದುರಂತ ಸಂಭವಿಸಿದೆ. ಇದೊಂದು ಅಪಘಾತ ಎಂಬುದನ್ನು ಎಲ್ಲರೂ ತಿಳಿಯಬೇಕು. ಘಟನೆ ಸಂಭವಿಸುವ ವೇಳೆ ಸಾಕಷ್ಟು ಮಂದಿ ರೈಲ್ವೇ ಹಳಿಗಳ ಮೇಲೆ ಹಾಗೂ ಕಲ್ಲುಗಳ ಮೇಲೆ ಕುಳಿತುಕೊಂಡಿದ್ದರು. ರಾವಣನನ್ನು ದಹನ ಮಾಡಿದಾಗ ಸಾಕಷ್ಟು ಮಂದಿ ಹಿಂದಕ್ಕೆ ತೆರಳಿ ರೈಲ್ವೇ ಹಳಿಗಳ ಮೇಲೆ ನಿಂತಿದ್ದಾರೆ. ಪಟಾಕಿ ಸಿಡಿದಿದ್ದರಿಂದಾರಿ ರೈಲುಗಳ ಶಬ್ಧ ಕೇಳಿಸಿಲ್ಲ. ಘಟನೆಯಲ್ಲಿ ನಿರ್ಲಕ್ಷ್ಯವಿದೆ. ಆದರೆ, ಉದ್ದೇಶಪೂರ್ವಕವಲ್ಲ ಎಂದು ತಿಳಿಸಿದ್ದಾರೆ.