ಇನ್ನು ಬೃಹತ್ ಪ್ರತಿಭಟನೆಗೆ ಸರ್ದಾರ್ ವಲ್ಲಭಭಾಯ್ ಪಟೇಲರಲ್ಲ... ಬದಲಿಗೆ ಗುಜರಾತ್ ಸರ್ಕಾರ ಕಾರಣವಂತೆ. ಹೌದು ಅಭಿವೃದ್ಧಿ ಹೆಸರಲ್ಲಿ ಗುಜರಾತ್ ಸರ್ಕಾರ ನಮ್ಮ ಅಸ್ಥಿತ್ವಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ. ಸರ್ದಾರ್ ವಲ್ಲಭಭಾಯ್ ಪಟೇಲರ ಸ್ಮಾರಕದ ಸುತ್ತಮುತ್ತಲ ಕೃಷಿ ಭೂಮಿಯನ್ನು ಪ್ರವಾಸೋಧ್ಯಮಕ್ಕಾಗಿ ಕಸಿಯಲು ಪ್ರಯತ್ನಿಸುತ್ತಿದೆ. ನಾವು ಈ ಕೃಷಿ ಭೂಮಿಯನ್ನೇ ನಮ್ಮ ಜೀವನಾಧಾರವಾಗಿಸಿಕೊಂಡಿದ್ದೇವೆ. ಇಲ್ಲಿನ ಸುತ್ತಮುತ್ತ ಗುಡ್ಡಗಾಡು ಪ್ರದೇಶಗಳು ನಮ್ಮ ಸಾಮಾನ್ಯ ಜೀವನದಲ್ಲಿ ಬೆರೆತು ಹೋಗಿದ್ದು, ಇವುಗಳಿಂದಲೇ ನಮ್ಮನ್ನು ದೂರ ಮಾಡಲು ಯತ್ನಿಸಲಾಗುತ್ತಿದೆ. ಭವಿಷ್ಯದಲ್ಲಿ ನಮ್ಮ ಒಪ್ಪಿಗೆಯೇ ಇಲ್ಲದೇ ನಮ್ಮನ್ನು ಇಲ್ಲಿಂದ ದೂರ ಮಾಡುವ ಸಾಧ್ಯತೆಯನ್ನೂ ಕೂಡ ಅಲ್ಲಗಳೆಯುವಂತಿಲ್ಲ. ಉದ್ಯೋಗ, ಪರಿಹಾರದ ಹೆಸರಲ್ಲಿ ಬಿಡಿಗಾಸು ನೀಡಿ ನಮ್ಮನ್ನು ನಮ್ಮ ತನದಿಂದ ದೂರ ಮಾಡುವ ದೊಡ್ಡ ಸಂಚು ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.