'ನಿಮ್ಮ ಈ ಯೋಜನೆಯಿಂದಾಗಿ ಇಲ್ಲಿನ ನೈಸರ್ಗಿಕ ಪರಿಸರ ಸಂಪೂರ್ಣ ಹಾಳಾಗಿದ್ದು, ಅಪರೂಪದ ತಳಿಯ ಕೀಟ, ಪಕ್ಷಿ ಪ್ರಾಣಿ ಪ್ರಬೇಧಗಳು ನಶಿಸಿ ಹೋಗಿವೆ. ಇಲ್ಲಿನ ಅರಣ್ಯ. ನದಿಗಳು, ಜಲಪಾತಗಳು, ಭೂಮಿ ಮತ್ತು ಕೃಷಿ ಭೂಮಿಗಳೇ ನಮಗೆ ಜವನಾಡಿಗಳಾಗಿದ್ದವು. ತಲೆತಲಾಂತರಗಳಿಂದಲೂ ನಾವು ಇವುಗಳನ್ನೇ ನಂಬಿಕೊಂಡು ಇಲ್ಲಿ ವಾಸವಾಗಿದ್ದೆವು. ಇದೀಗ ನಮ್ಮ ಮೂಲಕ್ಕೇ ನೀವು ಕೊಡಲಿ ಪೆಟ್ಟು ನೀಡಿದ್ದು, ನಮ್ಮಂತಹ ನೂರಾರು ಅಮಾಯಕರ ಸಾವಿನ ಸಮಾಧಿ ಮೇಲೆ ನಿಮ್ಮ ಸ್ಟ್ಯಾಚ್ಯೂ ಆಫ್ ಯೂನಿಟಿ ನಿಂತಿದೆ. ಬಹುಶಃ ಸರ್ದಾರ್ ವಲ್ಲಭ ಭಾಯ್ ಪಟೇಲರೂ ಕೂಡ ಇಲ್ಲಿ ಅಗಿರುವ ವಿಧ್ವಂಸವನ್ನು ನೋಡಿದರೆ ಖಂಡಿತಾ ಕಣ್ಣೀರು ಹಾಕುತ್ತಾರೆ ಎಂದು ಗ್ರಾಮಸ್ಥರು ಪತ್ರದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.