ಅಂತೆಯೇ 'ಗುಜರಾತ್ನ ಜನರು ಕೊಟ್ಟಿರುವ ಅಭಿನಂದನೆ ಪತ್ರಕ್ಕಾಗಿಯೂ ಗುಜರಾತ್ನ ಜನರಿಗೆ ನಾನು ಅಭಾರಿ. ತಾಯಿ ಮಗುವಿನ ಮೈದಡವಿದಾಗ ಮಗುವಿಗೆ ಹೊಸ ಉತ್ಸಾಹ ಸಿಗುತ್ತದೆ. ನೀವು ಕೊಟ್ಟ ಈ ಅಭಿನಂದನಾ ಪತ್ರದಿಂದ ನನ್ನಲ್ಲಿ ಇಂಥ ಅನುಭೂತಿ ಮೂಡುತ್ತಿದೆ. ಮತ್ತಷ್ಟು ಉತ್ತಮ ಕೆಲಸ ಮಾಡಬೇಕು ಎಂಬ ಹೊಸ ಉತ್ಸಾಹ ಮೂಡಿದೆ. ದೇಶದ ಭವಿಷ್ಯದ ಬಗ್ಗೆ ಘೋರ ನಿರಾಶೆ ಆವರಿಸಿದ್ದಾಗ, ದೇಶದ ಭೂಮಿ ನೂರಾರು ಹೋಳುಗಳಾಗಿ ತುಂಡುಗಳಾಗಿದ್ದಾಗ, ದೇಶದ ವೈವಿಧ್ಯತೆಯನ್ನೇ ಈ ದೇಶದ ಶಕ್ತಿ ಎಂದು ಸರ್ದಾರ್ ವಲ್ಲಭಬಾಯ್ ಪಟೇಲ್ ಸಾರಿ ಹೇಳಿದರು. ಪಟೇಲರ ಬಳಿ ಕೌಟಿಲ್ಯನ ಕುಟಿಲ ನೀತಿ, ಶಿವಾಜಿ ಮಹಾರಾಜರ ಕ್ಷಾತ್ರ ಬೆಸೆದುಕೊಂಡಿತ್ತು. ವಿದೇಶಿ ಆಕ್ರಮಣಕ್ಕಿಂತಲೂ ನಮ್ಮ ಒಳಜಗಳೇ ನಮಗೆ ದೊಡ್ಡ ಶತ್ರು ಎಂದು ಸರ್ದಾರ್ ಪಟೇಲರು ಸಾರಿ ಹೇಳಿದ್ದರು. ಏಕೀಕರಣದ ಶಕ್ತಿಯನ್ನು ಅವರು ಅರ್ಥ ಮಾಡಿಕೊಂಡಿದ್ದರು. ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ದೇಶದ ರಾಜರು ತಮ್ಮ ಸಂಸ್ಥಾನಗಳನ್ನು ಒಪ್ಪಿಸಿದರು.