ಮಹಾತ್ಮಾ ಗಾಂಧಿ ಹತ್ಯೆ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ: ನಟಿ ವಿವಾದಾತ್ಮಕ ಹೇಳಿಕೆ

ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಹತ್ಯೆಯಾಗಿದ್ದ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್
ಮುಂಬೈ: ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಹತ್ಯೆಯಾಗಿದ್ದ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವರಾ ಭಾಸ್ಕರ್ ಅವರು, ಈ ದೇಶದಲ್ಲಿ ಮಹಾತ್ಮಾ ಗಾಂಧಿ ಅವರಂತಹ ಮಹಾನ್ ವ್ಯಕ್ತಿಯ ಹತ್ಯೆ ಮಾಡಿದ್ದು ಈ ವೇಳೆ ಕೂಡ ಕೆಲವರು ಸಂಭ್ರಮಾಚರಣೆ ಮಾಡಿದ್ದರು. ಅಂತವರು ಇಂದು ಅಧಿಕಾರದಲ್ಲಿದ್ದು ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. 
ಸ್ವರಾ ಭಾಸ್ಕರ್ ಅವರು ಈ ಹಿಂದೆ ನಮ್ಮದು ಹಿಪೊಕ್ರಸಿಯಿಂದ ಕೂಡಿ ಸಮಾಜ ಎಂದು ಹೇಳಿಕೆ ನೀಡಿದ್ದರು. ಇದೇ ಅಲ್ಲದೆ ಹಸ್ತಮೈಥುನವೆಂದರೆ ನಮ್ಮ ದೇಹ ಮತ್ತು ಲೈಂಗಿಕತೆಯ ಮೇಲೆ ನಮ್ಮದೇ ಅಧಿಕಾರ ಎಂಬ ವಿವಾದಿತ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com