ಮಹಾತ್ಮಾ ಗಾಂಧಿ ಹತ್ಯೆ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ: ನಟಿ ವಿವಾದಾತ್ಮಕ ಹೇಳಿಕೆ
ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಹತ್ಯೆಯಾಗಿದ್ದ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಮುಂಬೈ: ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಹತ್ಯೆಯಾಗಿದ್ದ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವರಾ ಭಾಸ್ಕರ್ ಅವರು, ಈ ದೇಶದಲ್ಲಿ ಮಹಾತ್ಮಾ ಗಾಂಧಿ ಅವರಂತಹ ಮಹಾನ್ ವ್ಯಕ್ತಿಯ ಹತ್ಯೆ ಮಾಡಿದ್ದು ಈ ವೇಳೆ ಕೂಡ ಕೆಲವರು ಸಂಭ್ರಮಾಚರಣೆ ಮಾಡಿದ್ದರು. ಅಂತವರು ಇಂದು ಅಧಿಕಾರದಲ್ಲಿದ್ದು ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ಸ್ವರಾ ಭಾಸ್ಕರ್ ಅವರು ಈ ಹಿಂದೆ ನಮ್ಮದು ಹಿಪೊಕ್ರಸಿಯಿಂದ ಕೂಡಿ ಸಮಾಜ ಎಂದು ಹೇಳಿಕೆ ನೀಡಿದ್ದರು. ಇದೇ ಅಲ್ಲದೆ ಹಸ್ತಮೈಥುನವೆಂದರೆ ನಮ್ಮ ದೇಹ ಮತ್ತು ಲೈಂಗಿಕತೆಯ ಮೇಲೆ ನಮ್ಮದೇ ಅಧಿಕಾರ ಎಂಬ ವಿವಾದಿತ ಹೇಳಿಕೆ ನೀಡಿದ್ದರು.
#WATCH: Actor Swara Bhaskar in an interaction with media in Delhi says, 'Is desh mein Mahatma Gandhi jaise mahaan insaan ki hatya hui, us waqt bhi kuch aise log the jo celebrate kar rahe the unki hatya ko, aaj wo satta mein hain, un sabko daal dena chahiye jail mein?' pic.twitter.com/06tSMpo0d1