ಆದರೆ, ವಿಧಾನಸಭೆಯನ್ನು ವಿಸರ್ಜಿಸುವ ಕುರಿತ ಪ್ರಶ್ನೆಗೆ ಅವರಿಂದ ಸೂಕ್ತ ಉತ್ತರ ಸಿಕ್ಕಿಲ್ಲ. ತೆಲಂಗಾಣ ರಾಜ್ಯ ರಚನೆಯಾಗಿ ಸೆಪ್ಟೆಂಬರ್ 2 ನಾಲ್ಕು ವರ್ಷಗಳು ಪೂರೈಸಲಿವೆ. ಈ ದಿನದಂದು ಪ್ರಗತಿ ನಿವೇದನಾ ಸಮಾವೇಶ ಆಯೋಜಿಸಿರುವ ಕೆಸಿಆರ್, ಅಲ್ಲಿ ತಮ್ಮ ನಾಲ್ಕು ವರ್ಷಗಳ ಸಾಧನೆಯನ್ನು ಜನರ ಮುಂದಿಡಲು ತೀರ್ಮಾನಿಸಿದ್ದಾರೆ. ಅಲ್ಲದೆ, ಸಮಾವೇಶದ ಮೂಲಕವೇ ಚುನಾವಣೆಗೆ ರಣಕಹಳೆ ಮೊಳಗಿಸಲು ಅವರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.