ಕಳೆದ ಆಗಸ್ಟ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ಹೈದರಾಬಾದ್ ನಲ್ಲಿ ಖ್ಯಾತ ಎಡಪಂಥೀಯ ಲೇಖಕ ವರವರರಾವ್, ಮುಂಬೈನಲ್ಲಿ ವೆರ್ನಾನ್ ಗೊನ್ಸಾಲ್ವ್ಸ್ ಮತ್ತು ಅರುಣ್ ಫೆರೀರಾ, ಫರೀದಾ ಬಾದ್ ನಲ್ಲಿ ಸುಧಾ ಭಾರದ್ವಾಜ್, ದೆಹಲಿಯಲ್ಲಿ ಗೌತಮ್ ನವಲಖಾ ಅವರ ಮನೆಗಳ ಮೇಲೆ ದಾಳಿ ಮಾಡಿ ಬಂಧಿಸಲಾಗಿತ್ತು. ಬಳಿಕ ಕೋರ್ಟ್ ಅವರಿಗೆ ಗೃಹಬಂಧನ ಆದೇಶ ನೀಡಿತ್ತು.