ಬದಲಾದ ತೈಲ ಮಾರುಕಟ್ಟೆ ಪರಿಸ್ಥಿತಿ, ಇರಾನ್ ಮೇಲಿನ ಅಮೆರಿಕ ನಿರ್ಬಂಧ, ಡಾಲರ್ ಮೌಲ್ಯ ಏರಿಕೆ ಸೇರಿದಂತೆ ಹಲವು ಕಾರಣಗಳಿಂದಾಗಿ ದಿನೇ ದಿನೇ ತೈಲೋತ್ಪನ್ನಗಳ ಬೆಲೆ ಗಗನಕ್ಕೇರುತ್ತಿದ್ದು, ಈ ಹಿಂದೆಂದಿಂಗಿಂತಲೂ ತೈಲೋತ್ಪನ್ನಗಳ ದರ ಏರಿಕೆಯಾಗಿದೆ. ಈ ಹಿನ್ನಲೆಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಇದೇ ಸೆಪ್ಟೆಂಬರ್ 10ರಂದು ಭಾರತ್ ಬಂದ್ ಗೆ ಕರೆ ನೀಡಿದೆ. ಅಲ್ಲದೆ ಇದಕ್ಕೆ ಯುಪಿಎ ಮೈತ್ರಿ ಪಕ್ಷಗಳು ಕೈ ಜೋಡಿಸಿವೆ.