ಗುಜರಾತ್ ಎಟಿಎಸ್ ನ ಮಾಜಿ ಮುಖ್ಯಸ್ಥ ಡಿಜಿ ವಂಜಾರ ಸೇರಿದಂತೆ ನಾಲ್ವರನ್ನು ಸೋಹ್ರಾಬುದ್ಧೀನ್ ಎನ್ ಕೌಂಟರ್ ಪ್ರಕರಣದಲ್ಲಿ ವಜಾಗೊಳಿಸಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ವಂಜಾರ ಜೊತೆಗೆ ರಾಜಸ್ಥಾನ, ಗುಜರಾತ್ ನ ಇತರ ನಾಲ್ವರು ಪೊಲೀಸ್ ಅಧಿಕಾರಿಗಳು ಖುಲಾಸೆಗೊಂಡಿದ್ದು, ಖುಲಾಸೆ ಮಾಡಿರುವುದನ್ನು ಬಾಂಬೆಯ ಹೈಕೋರ್ಟ್ ಎತ್ತಿ ಹಿಡಿದಿದೆ. ಖುಲಾಸೆಗೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ವಿಚಾರಣೆಗೆ ಅರ್ಹವಾದುದ್ದಲ್ಲ ಎಂದು ಹೇಳಿದೆ.
ಐಪಿಎಸ್ ಅಧಿಕಾರಿಗಳಾದ ವಂಜಾರ, ರಾಜ್ಕುಮಾರ್ ಪಂಡಿಯನ್, ಎನ್ ಕೆ ಅಮಿನ್, ದಿನೇಶ್ ಎಂಎನ್ ಹಾಗೂ ದಲ್ಪತ್ ಸಿಂಗ್ ಅವರುಗಳನ್ನು ಖುಲಾಸೆಗೊಳಿಸಲಾಗಿದೆ.