ರೂ.30,000ಕ್ಕೆ ಹೆಚ್'ಡಿಎಫ್'ಸಿ ಉಪಾಧ್ಯಕ್ಷ ಸಾಂಘ್ವಿ ಹತ್ಯೆ

ಕೇವಲ ರೂ.30,000 ಗಾಗಿ ಹೆಚ್'ಡಿಎಫ್'ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ಧಾರ್ಥ ಸಾಂಘ್ವಿಯವರನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಕೇವಲ ರೂ.30,000 ಗಾಗಿ ಹೆಚ್'ಡಿಎಫ್'ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ಧಾರ್ಥ ಸಾಂಘ್ವಿಯವರನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ. 
5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಿದ್ಧಾರ್ಥರ ಮೃತದೇಹ ಸೋಮವಾರ ಪತ್ತೆಯಾಗಿತ್ತು. ದರೋಡೆ ಉದ್ದೇಶದಿಂದ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದರು. 
ಪ್ರಕರಣ ಸಂಬಂಧ ಆರೋಪಿ ಸರ್ಫರಾಜ್ ಶೇಖ್ ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಆತ ಮೃತರ ಕಚೇರಿಯಿದ್ದ ಕಮಲಾ ಮಿಲ್ಸ್'ನ ಪಾರ್ಕಿಂಗ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. 
ಸಿದ್ಧಾರ್ಥರ ಫೋನ್ ಆರೋಪಿ ಬಳಿಯಿದ್ದುದು ಆತನ ಬಂಧನಕ್ಕೆ ಸಹಕಾರಿಯಾಗಿದೆ. ಆರೋಗಿ ಬೈಕ್ ಸಾಲದ ಇಎಂಐ ಕಟ್ಟಲು ರೂ.30,000 ಬೇಕಿದ್ದು. ಇದಕ್ಕಾಗಿ ಸಿದ್ಧಾರ್ಥರನ್ನು ಆತ ಹಣ ಕೇಳಿದಾಗ ಅದಕ್ಕೆ ಅವರು ನಿರಾಕರಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸಿದ್ಧಾರ್ಥ್'ರನ್ನು ಶೇಖ್ ಹತ್ಯೆಮಾಡಿದ್ದಾನೆಂದು ತನಿಖೆ ವೇಳೆ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com