ಕುರಾನ್ ಷರೀಫ್ ಅಂತಿಮವೇ ಹೊರತು ಯಾವುದೇ ಕಾನೂನು, ಸಂವಿಧಾನಿಕ ಅಂತಿಮವಲ್ಲ, ರಾಜ್ಯದಲ್ಲಿರುವ ಹಲವು ಮುಸ್ಲಿಂ ಸಂಘಟನೆಗಳು ಈ ಸುಗ್ರೀವಾಜ್ಞೆಯ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಿದ್ದಿಕ್-ಉಲ್- ಚೌಧರಿ ಹೇಳಿದ್ದಾರೆ. ಯಾವುದೇ ಕಾನೂನು, ಸಂವಿಧಾನವೂ ಅಂತಿಮವಲ್ಲ ಕುರಾನ್ ಒಂದೇ ಅಂತಿಮವಾದದ್ದು, ಅಂತಿಮ ಗೆಲುವು ಸಹ ಕುರಾನ್ ನದ್ದೇ. ನಮಗೆ ಕುರಾನ್ ಧಾರ್ಮಿಕ ಗ್ರಂಥವೇ ಸರ್ವೋಚ್ಛ, ಯಾರೂ ಸಹ ಧಾರ್ಮಿಕ ವಿಚಾರಗಳಲ್ಲಿ ಮೂಗು ತೂರಿಸುವುದನ್ನು ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರು ಸಹಿಸುವುದಿಲ್ಲ ಎಂದು ಚೌಧರಿ ಎಚ್ಚರಿಸಿದ್ದಾರೆ.