ನವದೆಹಲಿ: ಭಾರತ-ಪಾಕಿಸ್ತನ ದ್ವಿಪಕ್ಷೀಯ ಮಾತುಕತೆ ರದ್ದುಗೊಳ್ಳುವುದಕ್ಕೆ ಐಎಸ್ಐ ನ ಈ ಒಂದು ಸಂದೇಶವೇ ಕಾರಣ ಎಂದು ಹೇಳಲಾಗುತ್ತಿದೆ.
ಎಸ್ ಪಿಒ ಗಳನ್ನು ಅಪಹರಿಸಿ ಹತ್ಯೆ ಮಾಡುವಂತೆ ಐಎಸ್ಐ ಭಯೋತ್ಪಾದಕರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿರುವುದು ಭಾರತದ ಗಮನಕ್ಕೆ ಬಂದಿದ್ದು, ಇದೇ ಕಾರಣದಿಂದಾಗಿ ಭಾರತ ಪಾಕಿಸ್ತಾನದ ಜತೆ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿದೆ.
ಅಧಿಕೃತ ಮಾಹಿತಿಯ ಪ್ರಕಾರ ಎಸ್ ಪಿಒ ಗಳನ್ನು ಹತ್ಯೆ ಮಾಡುವುದಕ್ಕೆ ಐಎಸ್ಐ ಸಂದೇಶ ನೀಡಿರುವುದು ಸ್ಪಷ್ಟವಾದ ಬಳಿಕ ಭಾರತ ಪಾಕ್ ಜೊತೆ ಮಾತುಕತೆ ನಡೆಸಲು ನಿರಾಕರಿಸಿದೆ. ಇದಕ್ಕೂ ಮುನ್ನ ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವರ ಮಾತುಕತೆ ನಿಗದಿಯಾಗಿತ್ತು