ಆಧಾರ್ ಸಿಂಧುತ್ವ ಕುರಿತು ಇಂದು ನಡೆದ ಕಲಾಪದಲ್ಲಿ ಪಂಚ ಸದಸ್ಯರ ಪೀಠದ ಐವರು ನ್ಯಾಯಮೂರ್ತಿಗಳ ಪೈಕಿ ಸಿಜೆಐ ದೀಪಕ್ ಮಿಶ್ರಾ ಸೇರಿದಂತೆ ನ್ಯಾ. ಅಶೋಕ್ ಭೂಷಣ್, ನ್ಯಾ. ಎ.ಕೆ. ಸಿಕ್ರಿ ಮತ್ತು ನ್ಯಾ. ಎ.ಎಂ. ಖಾನ್ವಿಲ್ಕರ್ ಅವರು ಆಧಾರ್ ಸಿಂಧುತ್ವ ಮಾನ್ಯತೆ ಮಾಡುವ ಕುರಿತು ತಮ್ಮ ನಿರ್ಧಾರ ಪ್ರಕಟಿಸಿದರೆ, ನ್ಯಾಯಮೂರ್ತಿ ಚಂದ್ರಚೂಡ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದರು.