ಧಾರ್ಮಿಕ ಮುಖಂಡರ ಬೆಂಬಲ ಪಡೆದು, ದೇವಸ್ವಂ ಮಂಡಳಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ, ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ತೀರ್ಪಿನ ಪೂರ್ಣಪಾಠವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುತ್ತೇವೆ, ನಂತರ ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇವೆ ಎಂದು ಎ ಪದ್ಮಕುಮಾರ್ ಹೇಳಿದ್ದಾರೆ. " ನಾವು ಈಗ ಇರುವ ಧಾರ್ಮಿಕ ಪದ್ಧತಿಗಳನ್ನೇ ಮುಂದುವರೆಸಬೇಕೆಂದಿದ್ದೇವೆ" ಎಂಬುದನ್ನು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಎಂದು ಪದ್ಮಕುಮಾರ್ ಹೇಳಿದ್ದಾರೆ. ಆದರೆ ಈಗ ಬೇರೆ ಯಾವುದೇ ಮಾರ್ಗವಿಲ್ಲದೇ ತೀರ್ಪನ್ನು ದೇವಸ್ವಂ ಮಂಡಳಿ ಜಾರಿಗೆ ತರಬೇಕಿದೆ.