ಜಮ್ಮು ಕಾಶ್ಮೀರ: ಆರ್ ಎಸ್ ಎಸ್ ಮುಖಂಡನ ಮೇಲೆ ಉಗ್ರ ದಾಳಿ

ಷ್ಟ್ರೀಯ ಸ್ವಯಂಸೇವಕ ಸಂಅಘ (ಆರ್ ಎಸ್ ಎಸ್) ನಾಯಕರೊಬ್ಬರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಜಮ್ಮು: ರಾಷ್ಟ್ರೀಯ ಸ್ವಯಂಸೇವಕ ಸಂಅಘ (ಆರ್ ಎಸ್ ಎಸ್) ನಾಯಕರೊಬ್ಬರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ನಡೆದಿದೆ.

ಸ್ಥಳೀಯ ಆರ್ ಎಸ್ ಎಸ್ ಶಖೆಯ ನಾಯಕರಾದ ಚಂದ್ರಕಾತ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ, ದಾಳಿಯಲ್ಲಿ ಚಂದ್ರಕಾಂತ ಅವರಿಗೆ ಗಾಯಗಳಾಗಿದ್ದರೆ ಅವರ ಅಂಗರಕ್ಷಕ, ಪೋಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಗಾಯಾಳು ಚಂದ್ರಕಾಂತ್ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಕಿಶ್ತ್ವಾರ್‌ ಜಿಲಲ್ಲಾಸ್ಪತ್ರೆಯಯಲ್ಲಿ ವೈದ್ಯಕೀಯ ಅಧೀಖಕರಾಗಿದ್ದ ಚಂದ್ರಕಾಂತ್ ಮೇಲೆ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಗೆ ನುಗ್ಗಿದ್ದ ಶಸ್ತ್ರಧಾರಿಯೊಬ್ಬ ಗುಂಡು ಹಾರಿಸಿದ್ದಾನೆ.ಘಟನೆ ಬಳಿಕ ಸ್ಥಳದಲ್ಲಿ ಕರ್ಫ್ಯೂ ಹಾಕಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com