ಇಲ್ಲಿನ ಬನದುರ್ಗ ಪ್ರಾಂತ್ಯದ ಗುಹೆಯೊಂದರಲ್ಲಿ ಈ ವಿಶಿಷ್ಟ ದೇಗುಲವಿದ್ದು, ಇಲ್ಲಿ ಶಿವ-ಪಾರ್ವತಿಯರನ್ನು ಸಹೋದರ-ಸಹೋದರಿ ಎಂದು ಪೂಜಿಸಲಾಗುತ್ತಿದೆ. ಈ ಬಡುಕಟ್ಟು ನಿವಾಸಿಗಳ ನಂಬಿಕೆಗೆ ಯಾವುದೇ ಐತಿಹಾಸಿಕ ಪುರಾವೆಗಳು ಸಿಕ್ಕಿಲ್ಲವಾದರೂ, ಇಲ್ಲಿನವರ ನಂಬಿಕೆಯಂತೆ ಒಮ್ಮೆ ಶಿವ-ಪಾರ್ವತಿಯರು ಭೂಲೋಕದಲ್ಲಿ ಸೋಹದರ-ಸಹೋದರಿಯಾಗಿ ಜನಿಸಲು ನಿರ್ಧರಿಸದರಂತೆ. ಅದರಂತೆ ಭೂಮಿಯಲ್ಲಿ ಹೊಸ ಅವತಾರವೆತ್ತಿದ್ದರಂತೆ. ಇಲ್ಲಿನ ಬನದುರ್ಗ ಗುಹೆಯಲ್ಲಿ ಶಿವ ಮತ್ತು ದೇವಿ ಪಾರ್ವತಿ ಆಕೆಯ ಪೋಷಕರೊಂದಿಗೆ ಜೀವಿಸುತ್ತಿದ್ದರಂತೆ. ಅಲ್ಲದೇ ಇದೇ ಗುಹೆಯಲ್ಲೇ ಶಿವ ತಪ್ಪಸ್ಸಿಗೆ ಕುಳಿತಿದ್ದರು ಎಂದು ಇಲ್ಲಿನ ನಿವಾಸಿಗಳು ನಂಬಿದ್ದಾರೆ.