ಕುಲಭೂಷಣ್ ಜಾಧವ್ ಗೆ ಅಡೆತಡೆಯಿಲ್ಲದ ರಾಯಬಾರ ಪ್ರವೇಶಕ್ಕೆ ಭಾರತದ ಕೋರಿಕೆ

ಪಾಕಿಸ್ತಾನದಲ್ಲಿರುವ ಭಾರತದ ನೌಕಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಅಡೆತಡೆಯಿಲ್ಲದ ರಾಯಬಾರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಭಾರತ ಪಾಕಿಸ್ತಾನವನ್ನು ಕೋರಿದೆ.
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತದ ನೌಕಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಅಡೆತಡೆಯಿಲ್ಲದ ರಾಯಬಾರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಭಾರತ ಪಾಕಿಸ್ತಾನವನ್ನು ಕೋರಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶದಂತೆ ಯಾವುದೇ ಆತಂಕ ಮತ್ತು ಪ್ರತೀಕಾರವಿಲ್ಲದ ವಾತಾವರಣದಲ್ಲಿ ಕುಲಭೂಷಣ್ ಜಾಧವ್ ಅವರಿಗೆ ರಾಯಬಾರ ಪ್ರವೇಶ ಒದಗಿಸಬೇಕು ಎಂದು ಕೋರಲಾಗಿದೆ ಪಾಕಿಸ್ತಾನದ ಪ್ರತಿಕ್ರಿಯೆಗಾಗಿ ಭಾರತ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ 18 ರಂದು ಪಾಕಿಸ್ತಾನವು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಅನುಸರವಾಗಿ ಜಾಧವ್ ಗೆ ವಿಯೆನ್ನಾ ಸಮಾವೇಶದ ಅಡಿಯಲ್ಲಿ ತನ್ನ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ ಎಂದು ಘೋಷಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com