ಹೌದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆ ಒಂದು ಸಹಿ ಈ ಕಲಂ ಇತಿಹಾಸದ ಪುಟ ಸೇರುವಂತಾಯಿತು. 370ನೇ ವಿಧಿಯ ಮೂರನೇ ಅಂಶದ - 370(3) ಪ್ರಕಾರ, ರಾಷ್ಟ್ರಪತಿಗಳ ಈ ವಿಧಿ ರದ್ದಾಗಿದೆ ಎಂದು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಅಸೆಂಬ್ಲಿಯ ಅನುಮತಿ ಬೇಕು ಅಷ್ಟೇ. ಈಗ ಅಲ್ಲಿ ಇರುವುದು ರಾಜ್ಯಪಾಲ ಆಡಳಿತ. ಅದನ್ನೇ ಬಳಸಿಕೊಂಡು ಮೋದಿ-ಶಾ ಕಮಾಲ್ ಮಾಡಿದ್ದಾರೆ.