ಆತ್ಮಹತ್ಯೆಗೆ ಯತ್ನಿಸಿದ ಯುವತಿಗೆ ಐಸಿಯುನಲ್ಲಿ ತಾಳಿ ಕಟ್ಟಿ ಪರಾರಿಯಾದ ಪ್ರಿಯತಮ!

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಆತ್ಮಹತ್ಯೆಗೆ ಯತ್ನಿಸಿದ ತನ್ನ ಪ್ರೇಯಸಿಯನ್ನು ಬಲವಂತದಿಂದಲೇ ಮದುವೆಯಾದ ಪ್ರಿಯಕರನೊಬ್ಬ ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. 
ಐಸಿಯುನಲ್ಲಿ ವಿವಾಹವಾದ ಯುವಕ
ಐಸಿಯುನಲ್ಲಿ ವಿವಾಹವಾದ ಯುವಕ
Updated on

ಪುಣೆ:  ಮಹಾರಾಷ್ಟ್ರದ ಪುಣೆ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಆತ್ಮಹತ್ಯೆಗೆ ಯತ್ನಿಸಿದ ತನ್ನ ಪ್ರೇಯಸಿಯನ್ನು ಬಲವಂತದಿಂದಲೇ ಮದುವೆಯಾದ ಪ್ರಿಯಕರನೊಬ್ಬ ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. 

ವಿವಾಹವಾಗಲು ಯುವಕ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 

 ತಾಳಿಕಟ್ಟ ಪರಾರಿಯಾದ ಯುವಕನ ವಿರುದ್ಧ ಯುವತಿ  ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಸುರಾಜ್ ನಾಲ್ವಾಡೆ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ವಿಚಾರಣೆ ಪ್ರಾಥಮಿಕ ಹಂತದಲ್ಲಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ  ಎಂದು ವಿಚಾರಣಾಧಿಕಾರ ಪ್ರಕಾಶ್ ರಾಥೋರ್ ಹೇಳಿದ್ದಾರೆ. 

ಸುರಾಜ್ ನಾಲ್ವಾಡೆ ಬಲವಂತದಿಂದ ತನ್ನ ಮೇಲೆ ದೈಹಿಕ ಸಂಪರ್ಕ ನಡೆಸಿದ್ದಾನೆ.  ತಾನೂ  ಕೆಳ ಜಾತಿಗೆ ಸೇರಿರುವುದರಿಂದ ಮದುವೆಯಾಗಲು ಆತ ನಿರಾಕರಿಸಿರುವುದಾಗಿ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com