ಕಾಮುಕರ ಎನ್'ಕೌಂಟರ್: ಆರೋಪಿಗಳ ಮೃತದೇಹ ಹಸ್ತಾಂತರಕ್ಕೆ ಕುಟುಂಬಸ್ಥರ ಧರಣಿ

ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಎನ್‍ಕೌಂಟರ್‍ ನಲ್ಲಿ ಹತ್ಯೆಯಾದ ಆರೋಪಿಗಳಲ್ಲಿ ಒಬ್ಬನಾದ ಚೆನ್ನಕೇಶವಲು ಮೃತದೇಹವನ್ನು ತಮಗೆ ಒಪ್ಪಿಸುವಂತೆ ಆತನ ಕುಟುಂಬದವರು ನಾರಾಯಣಪೇಟ್‍ ಜಿಲ್ಲೆಯ ಮುತ್ಕಲ್‍ ಮಂಡಲದ ಗುಡಿಗಂಡ್ಲ ಗ್ರಾಮದಲ್ಲಿ ಧರಣಿ ನಡೆಸಿದ್ದಾರೆ.
ಹತ್ಯೆಯಾದ ಆರೋಪಿಗಳು
ಹತ್ಯೆಯಾದ ಆರೋಪಿಗಳು
Updated on

ಹೈದರಾಬಾದ್‍: ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಎನ್‍ಕೌಂಟರ್‍ ನಲ್ಲಿ ಹತ್ಯೆಯಾದ ಆರೋಪಿಗಳಲ್ಲಿ ಒಬ್ಬನಾದ ಚೆನ್ನಕೇಶವಲು ಮೃತದೇಹವನ್ನು ತಮಗೆ ಒಪ್ಪಿಸುವಂತೆ ಆತನ ಕುಟುಂಬದವರು ನಾರಾಯಣಪೇಟ್‍ ಜಿಲ್ಲೆಯ ಮುತ್ಕಲ್‍ ಮಂಡಲದ ಗುಡಿಗಂಡ್ಲ ಗ್ರಾಮದಲ್ಲಿ ಧರಣಿ ನಡೆಸಿದ್ದಾರೆ.

ಆರೋಪಿ ಚೆನ್ನಕೇಶವುಲು ಪತ್ನಿ ರೇಣುಕಾ ಮತ್ತು ತಾಯಿ ಜಯಮ್ಮ ಅವರು ರಸ್ತೆಯಲ್ಲಿ ಧರಣಿ ನಡೆಸಿ, ಮೃತದೇಹದ ಅಂತ್ಯಕ್ರಿಯೆಯನ್ನು ಪೊಲೀಸರು ನಡೆಸುವ ಬದಲಿಗೆ ತಮ್ಮ ಕೃಷಿ ಜಮೀನನಲ್ಲೇ ನೆರವೇರಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ಹತ್ಯೆಯ ಆರೋಪಿಯ ಕುಟುಂಬದವರು ಧರಣಿ ನಡೆಸಿದ್ದರಿಂದ ಈ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com