ರಾಮ ಮಂದಿರಕ್ಕಾಗಿ ಪ್ರತೀ ಮನೆಯಿಂದ ರೂ.11, 1 ಇಟ್ಟಿಗೆ ನೀಡಬೇಕು: ಯೋಗಿ ಆದಿತ್ಯಾನಾಥ್

ಅಯೋಧ್ಯೆ ರಾಮ ಮಂದಿರಕ್ಕಾಗಿ ಪ್ರತೀ ಮನೆಯಿಂದ ರೂ.11 ಹಾಗೂ 1 ಇಟ್ಟಿಗೆಯನ್ನು ನೀಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯಾನಾಥ್ ಅವರು ಹೇಳಿದ್ದಾರೆ. 
ಯೋಗಿ ಆದಿತ್ಯಾನಾಥ್
ಯೋಗಿ ಆದಿತ್ಯಾನಾಥ್
Updated on

ಗಿರಿಡಿಹ್: ಅಯೋಧ್ಯೆ ರಾಮ ಮಂದಿರಕ್ಕಾಗಿ ಪ್ರತೀ ಮನೆಯಿಂದ ರೂ.11 ಹಾಗೂ 1 ಇಟ್ಟಿಗೆಯನ್ನು ನೀಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯಾನಾಥ್ ಅವರು ಹೇಳಿದ್ದಾರೆ. 

ಜಾರ್ಖಾಂಡ್ ರಾಜ್ಯದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಅಯೋಧ್ಯೆಯಲ್ಲಿ ಶೀಘ್ರದಲ್ಲಿಯೇ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣಕ್ಕಾಗಿ ಜಾರ್ಖಾಂಡ್ ರಾಜ್ಯದ ಪ್ರತೀ ಮನೆಯಿಂದಲೂ ರೂ.11 ಹಾಗೂ ಒಂದೊಂದು ಇಟ್ಟಿಗೆಯನ್ನು ಕೊಡಬೇಕು. ಸಮಾಜ ನೀಡುವ ಕೊಡುಗೆಯಿಂದ ರಾಮ ರಾಜ್ಯ ನಡೆಯಬೇಕೆಂದು ಹೇಳಿದ್ದಾರೆ. 

ರಾಮರಾಜ್ಯ ಇದ್ದಲ್ಲಿ ಯಾವುದೇ ಕಾರಣಕ್ಕೂ ತಾರತಮ್ಯ ಇರುವುದಿಲ್ಲ. ಸಮಾಜ ಪ್ರತೀ ಭಾಗವಾಗಿರುವ ಯುವಕರು, ದಲಿತರು, ಮಹಿಳೆಯಲು ಸೇರಿ ವಿವಿಧೆಡೆಯಲ್ಲಿಯೂ ಅಭಿವೃದ್ಧಿ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com