ದೆಹಲಿ ಸಿಎಂ ಕೇಜ್ರಿವಾಲ್ ಕಾರಿನ ಮೇಲೆ 100 ಮಂದಿಯ ತಂಡದಿಂದ ದಾಳಿ: ಬಿಜೆಪಿ ಕೃತ್ಯ ಎಂದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರ್ ನ ಮೇಲೆ ಸುಮಾರು ನೂರು ಜನರಿದ್ದ ಗುಂಪೊಂದು ಏಕಾಏಕಿ ದಾಳಿ ಮಾಡಿದೆ.
ದೆಹಲಿ ಸಿಎಂ ಕೇಜ್ರಿವಾಲ್ ಕಾರಿನ ಮೇಲೆ 100 ಮಂದಿಯ ತಂಡದಿಂದ ದಾಳಿ: ಬಿಜೆಪಿ ಕೃತ್ಯ ಎಂದ ಎಎಪಿ
ದೆಹಲಿ ಸಿಎಂ ಕೇಜ್ರಿವಾಲ್ ಕಾರಿನ ಮೇಲೆ 100 ಮಂದಿಯ ತಂಡದಿಂದ ದಾಳಿ: ಬಿಜೆಪಿ ಕೃತ್ಯ ಎಂದ ಎಎಪಿ
Updated on
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರ್ ನ ಮೇಲೆ ಸುಮಾರು ನೂರು ಜನರಿದ್ದ ಗುಂಪೊಂದು ಏಕಾಏಕಿ ದಾಳಿ ಮಾಡಿದೆ. ಶುಕ್ರವಾರ ನಡೆದ ಘಟನೆ ವೇಳೆ ದೊಣ್ಣೆ ಇತರೆ ಮಾರಕಾಸ್ತ್ರಗಳ ಹಿಡಿದು ದಾಳಿ ನಡೆಸಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.
ಪಶ್ಚಿಮ ದೆಹಲಿಯ ನರೇಲಾ ಎಂಬಲ್ಲಿ ಈ ಘಟನೆ ನಡೆದಿದೆ.ಗುಂಪು ದೆಹಲಿ ಮುಖ್ಯಮಂತ್ರಿಗಳ ಕಾರನ್ನು ತಡೆದು ಕಾರಿಗೆ ದೊಣ್ಣೆಯಿಂದ ಹೊಡೆದು ಹಾನಿಗೊಳಿಸಿದೆ.
ದೆಹಲಿ ಹೊರವಲಯದ ಕಾಲೋನಿಯೊಂದರಲ್ಲಿ ಅಭಿವೃದ್ದಿ ಕಾಮಗಾರಿ ಉದ್ಘಾಟನೆಗೆ ಕೇಜ್ರಿವಾಲ್ ಆಗಮಿಸಿದ್ದರು.ದಾಳಿ ಮಾಡಿದವರು ಬಿಜೆಪಿ ಕಾರ್ಯಕರ್ತರೆಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಘಟನೆಯಲ್ಲಿ ಸಿಎಂ ಕಾರಿನ ಮಿರರ್ ಹಾನಿಗೊಳಗಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com