ಮುಂಬೈ: ಪುಲ್ವಾಮ ದಾಳಿ ಬೆನ್ನಲ್ಲೇ ಪಾಕ್ ಜಿಂದಾಬಾದ್ ಘೋಷಣೆ ಕೂಗಿದ ರೈಲ್ವೆ ಟಿಸಿ; ಬಂಧನ

ಪುಲ್ವಾಮ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಮುಂಬೈ ನಲ್ಲಿ ಟಿಕೆಟ್ ಕಲೆಕ್ಟರ್ ಓರ್ವ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ.
ಮುಂಬೈ: ಪುಲ್ವಾಮ ದಾಳಿ ಬೆನ್ನಲ್ಲೇ ಪಾಕ್ ಜಿಂದಾಬಾದ್ ಘೋಷಣೆ ಕೂಗಿದ ರೈಲ್ವೆ ಟಿಸಿ; ಬಂಧನ
ಮುಂಬೈ: ಪುಲ್ವಾಮ ದಾಳಿ ಬೆನ್ನಲ್ಲೇ ಪಾಕ್ ಜಿಂದಾಬಾದ್ ಘೋಷಣೆ ಕೂಗಿದ ರೈಲ್ವೆ ಟಿಸಿ; ಬಂಧನ
ಮುಂಬೈ: ಪುಲ್ವಾಮ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಮುಂಬೈ ನಲ್ಲಿ ಟಿಕೆಟ್ ಕಲೆಕ್ಟರ್ ಓರ್ವ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ. 
ಲೋನಾವಾಲದಲ್ಲಿ ಈ ಘಟನೆ ನಡೆದಿದೆ. ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು, ಪಾಕಿಸ್ತಾನದ ಪಾಪಿ ಕೃತ್ಯವನ್ನು ಖಂಡಿಸಲು ಶಿವಾಜಿ ಚೌಕ್ ಬಳಿ ಜನರು ಸೇರಿದ್ದರು. ಈ ವೇಳೆ ಉಪೇಂದ್ರ ಕುಮಾರ್ ಶ್ರೀವೀರ್ ಬಹದ್ದೂರ್ ಸಿಂಗ್ ಎಂಬಾತ ಪಾಕ್ ಪರ ಘೋಷಣೆ ಕೂಗಿದ್ದು ಬಂಧನಕ್ಕೊಳಗಾಗಿದ್ದಾನೆ. 
ಶ್ರದ್ಧಾಂಜಲ್ಲಿ ಸಲ್ಲಿಸಲು ಜನತೆ ನೆರೆದಿದ್ದಾಗ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಉಪೇಂದ್ರ ಕುಮಾರ್ ಶ್ರೀವೀರ್ ಬಹದ್ದೂರ್ ಏಕಾಏಕಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಆತನನ್ನು ಬಂಧಿಸಿದ್ದು, ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆ ತಂದಿರುವ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಕೋರ್ಟ್ ಈ ವ್ಯಕ್ತಿಯನ್ನು ಫೆ.18 ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ರೈಲ್ವೆ ಇಲಾಖೆ ತನ್ನ ನೌಕರನನ್ನು ಅಮಾನತುಗೊಳಿಸಿದೆ. ಈ ವ್ಯಕ್ತಿಗೂ ತೀವ್ರಗಾಮಿ ಸಂಘಟನೆಗಳಿಗೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com