ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆ ನೌಶೇರಾ ವಲಯದಲ್ಲಿ ಐಇಡಿ (ಸುಧಾರಿತ ಸ್ಪೋಟಕ)ಸ್ಫೋಟವಾಗಿ ಭಾರತೀಯ ಸೇನಾಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ..ಉಗ್ರಗಾಮಿಗಳು ಇಟ್ಟಿದ್ದ ಐಇಡಿಯನ್ನು ನಿಷ್ಕ್ರಿಯ ಗೊಳಿಸುವ ವೇಳೆ ಈ ದುರಂತ ಸಂಭವಿಸಿದೆ. ಮೃತರು ಕಾರ್ಪ್ಸ್ ಆಫ್ ಇಂಜಿನಿಯರ್ಸ್ನಿಂದ ಬಂದವರಾಗಿದ್ದರು..ನೌಷಾದಾ ವಲಯದಲ್ಲಿ ನಿಯಂತ್ರಣ ರೇಖೆಯಿಂದ 1.5 ಕಿ.ಮೀ. ಒಳಗೆ ಈ ಐಇಡಿಯನ್ನಿಡಲಾಗಿತ್ತು..ಪಲ್ವಾಮಾ ಭಯೋತ್ಪಾದನಾ ದಾಳಿಯಿಂದ ಫೆಬ್ರವರಿ 14ರಂದು ದೇಶದ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos