ಅಸ್ಸಾಂನ ಲಖೀಂ ಪುರ್ ನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸರ್ಬಾನಂದ ಸೋನೋವಾಲ್ ಅವರು, ಪುಲ್ವಾಮ ಉಗ್ರ ದಾಳಿಯನ್ನು ಮೊಘಲರ ದಾಳಿಗೆ ಹೋಲಿಕೆ ಮಾಡಿದರು. ಈ ವೇಳೆ ದೇಶ ಸ್ವತಂತ್ರ್ಯಗೊಂಡರೂ ಮೊಘಲರ ದಾಳಿ ಮಾತ್ರ ಇನ್ನೂ ನಿಂತಿಲ್ಲ. ಇದಕ್ಕೆ ಪುಲ್ವಾಮ ಉಗ್ರ ದಾಳಿ ಸ್ಪಷ್ಟ ಉದಾಹರಣೆ. ಪುಲ್ವಾಮ ಉಗ್ರ ದಾಳಿ ಇಸ್ಲಾಮಿಕ್ ಉಗ್ರರ ದಾಳಿಯಾಗಿದ್ದು, ದಾಳಿಯಲ್ಲಿ ನಮ್ಮ 40ಕ್ಕೂ ಅಧಿಕ ವೀರ ಯೋಧರು ಹುತಾತ್ಮರಾಗಿದ್ದಾರೆ.