ಕುಂಭಮೇಳದಿಂದ ದೇಶ ಅಭಿವೃದ್ಧಿಯಾಗುವುದಿಲ್ಲ; ಸಂವಿಧಾನ ಅನುಷ್ಠಾನಗೊಳಿಸಿ; ಸಾವಿತ್ರಿ ಬಾಯ್ ಪುಲೆ

ಕೇವಲ ಕುಂಭಮೇಳ ನಡೆಸಿ, ದೇವಾಲಗಳ ಕಟ್ಟಿದರೇ ದೇಶ ಅಭಿವೃದ್ಧಿಯಾಗುವುದಿಲ್ಲ, ಬದಲಿಗೆ ಸಂವಿಧಾನ ಅನುಷ್ಠಾನಗಳಿಸಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾದ್ಯ ...
ಸಾವಿತ್ರಿ ಬಾಯ್ ಫುಲೆ
ಸಾವಿತ್ರಿ ಬಾಯ್ ಫುಲೆ
ಉತ್ತರ ಪ್ರದೇಶ: ಕೇವಲ ಕುಂಭಮೇಳ ನಡೆಸಿ, ದೇವಾಲಗಳ ಕಟ್ಟಿದರೇ ದೇಶ ಅಭಿವೃದ್ಧಿಯಾಗುವುದಿಲ್ಲ, ಬದಲಿಗೆ ಸಂವಿಧಾನ  ಅನುಷ್ಠಾನಗಳಿಸಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾದ್ಯ ಎಂದು ಬಿಜೆಪಿ ಮಾಜಿ ನಾಯಕಿ ಸಾವಿತ್ರಿ ಬಾಯಿ ಪುಲೆ ಹೇಳಿದ್ದಾರೆ.
ಜನರ ಹಾಗೂ ಉದ್ಯೋಗ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ತ್ತು ಪಂಗಡಗಳ ಜನ ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. 
ಆದರೆ ಉತ್ತರ ಪ್ರದೇಶ ಸರ್ಕಾರ ಕೋಟಿಗಟ್ಟಲೆ ಹಣವನ್ನು ಕುಂಭಮೇಳ ಮತ್ತು ದೇವಾಲಯಗಳಿಗಾಗಿ ವ್ಯಯಿಸುತ್ತಿದೆ.  ಕುಂಭ ಅಥವಾ ದೇವಾಲಯಗಳು ಜನರ ಅವಶ್ಯಕತೆಗಳನ್ನು  ಪೂರೈಸುತ್ತವೆಯೇ ಎಂದುಪ್ರಶ್ನಿಸಿದ್ದಾರೆ.
ಕುಂಭ ಅಥವಾ ದೇವರಿಂದ ದೇಶದ ಆಳ್ವಿಕೆ ನಡೆಸಲಾಗದು,  ಸಂವಿಧಾನ ಅನುಷ್ಟಾನಗೊಳಿ್ಸಿ ಅದರ ಮೂಲಕ ಕೆಲಸ ಮಾಡಬೇಕು . ಉತ್ತರ ಪ್ರದೇಶ ಸಿಎಂ ಆಳ್ವಿಕ ನಡೆಸಲು ಸಮರ್ಥರಾಗಿಲ್ಲ, ಎಂದು ಅವರು ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com