ಪೇಪರ್ ವಿಮಾನ ಎಸೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವುಜ್ಲಾ ಅವರು, ಚರ್ಚೆ ರಫೇಲ್ ಖರೀದಿ ಒಪ್ಪಂದ ಕುರಿತಂತೆ ನಡೆಯಬೇಕಿತ್ತು. ನಾಯಕರು ರಫೇಲ್ ಒಪ್ಪಂದ ಕುರಿತಂತೆಯೇ ಮಾತನಾಡಬೇಕಿತ್ತು. ಆದರೆ ಬೋಫೋರ್ಸ್, ಅಗಸ್ಟಾವೆಸ್ಟ್ ಲ್ಯಾಂಡ್ ಮತ್ತು ನ್ಯಾಷನಲ್ ಹೆರಾಲ್ಡ್ ಬಗ್ಗೆ ಮಾತುಕತೆ ಆರಂಭವಾಗಿತ್ತು. ಹೀಗಾಗಿ ನಾವು ಪೇಪರ್ ವಿಮಾನಗಳನ್ನು ಎಸೆದೆವು. ರಫೇಲ್ ವಿವಾದ ಸಂಬಂಧ ಸಂಸದೀಯ ಜಂಟಿ ಸಮಿತಿ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ.