ಡಿ.13 ರಂದು ಕಾರ್ಮಿಕರು ಗಣಿ ದುರಂತದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ. ರಕ್ಷಣಾ ಕಾರ್ಯಾಚರಣೆ ನಮಗೆ ತೃಪ್ತಿ ತಂದಿಲ್ಲ. ಅವರು ಸತ್ತಿದ್ದಾರೋ, ಬದುಕಿದ್ದಾರೋ ಅದರ ಅಗತ್ಯವಿಲ್ಲ. ಆದರೆ, ಅವರನ್ನು ಹೊರ ತೆಗೆಯಲೇ ಬೇಕು. ಕಾರ್ಮಿಕರು ಬದುಕುಳಿದು ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆಂದು ಹೇಳಿದೆ.